ನಂತರ ನೀನು ಮಾತಾಡೋದು ಕಲಿತೆ. ಮಾತು ಬಂದಿದ್ದೇ ತಡ ದೇವರಲ್ಲಿ ನಿನ್ನ ಪ್ರಥಮ ಕೋರಿಕೆ - ದೇವ್ರೇ ಬೇಗ ಮೀಸೆ ಬರೋ ಹಾಗೆ ಮಾಡಪ್ಪ ಅಂತ. ಗುಡಿಗೆ ಹೋದ್ರೆ ನಮಗಂತೂ ಹೊಟ್ಟೆ ಹುಣ್ಣಾಗುವಷ್ಟು ನಗು. ನಂತರ ನಿನ್ನ ಶಾಲೆಗೆ ಸೇರಿಸಬೇಕದ್ರಂತೂ ನಾನು ಶತಪ್ರಯತ್ನ ಮಾಡಬೇಕಾಯ್ತು. ಅದೆಷ್ಟು ಹಠ ಪುಟ ನಿಂದು. ಆದರೆ ಅಲ್ಲಿಂದ ನೀ ಹಿಡಿದ ಹಾದಿಗಳೆಲ್ಲವೂ ಯಶಸ್ಸಿನವೇ.
ಹೀಗೆಯೇ ನಿನ್ನ ಜೀವನದಲ್ಲಿ ಪ್ರತಿ ಘಳಿಗೆ, ಪ್ರತಿ ಕ್ಷಣವೂ ಯಶಸ್ಸು ದೊರೆಯುತಿರಲಿ. ಜೀವನವೆಂಬ ದೋಣಿಯ ಚುಕ್ಕಾಣಿ ಯಾವ ತರಹದ ನೇವುರಕ್ಕೂ ಸಿಗದಂತೆ ಅದನ್ನು ಅತೀ ಜಾಗರೂಕತೆಯಿಂದ ನಡೆಸುವಂತಾಗಲಿ.ಧಮನಿ-ಧಮನಿಗಳ ಮಿಡಿತಗಳಲ್ಲಿ ಕೇಳಿ ಬರಲಿ ಪರಿಶ್ರಮ,ಹೋರಾಟ,ವಿವೇಕ,ಸಭ್ಯತೆ,ಸಜ್ಜನಿಕೆಯ ಸಾಮಗಾನ. ನೀನು ಮಾಡಿದ ಉಪಕಾರ, ಆಡಿದ ಒಳ್ಳೆಯ ಮಾತೇ ನಿನ್ನ ಭವಿಷ್ಯಕ್ಕೆ ಇಂಬು.ಈ ನಿನ್ನ ೧೭ನೆಯ ಸಂವತ್ಸರದ ಹುಟ್ಟು ಹಬ್ಬ ಉಜ್ವಲ ಹಾಗೂ ಶಾಂತಿ ತುಂಬಿದ ಖುಷಿ ಜೀವನಕ್ಕೆ ನಾಂದಿಯಾಗಲೆಂದು ಆಶಿಸುತ್ತಾ
-ನಿನ್ನ ಅಕ್ಕ
ಮತ್ತೊಮ್ಮೆ ಹುಟ್ಟು ಹಬ್ಬದ ಅದೇ ಮುಗ್ಧತೆ ತುಂಬಿದ ಶುಭಾಶಯ ಪುಟ್ಟ:):)
ಶುಭವಾಗಲಿ:)
ಮತ್ತೊಮ್ಮೆ ಹುಟ್ಟು ಹಬ್ಬದ ಅದೇ ಮುಗ್ಧತೆ ತುಂಬಿದ ಶುಭಾಶಯ ಪುಟ್ಟ:):)
ಶುಭವಾಗಲಿ:)
No comments:
Post a Comment